ಮುಝಪ್ಪರ್ ನಗರ: ಹಿಂದೂಗಳಿಗೆ ಎಷ್ಟು ಸಾಧ್ಯವೋ ಅಷ್ಟು ಮಕ್ಕಳು ಮಾಡಿ ದೇಶದಲ್ಲಿ ಜನಸಂಖ್ಯೆ ನಿಯಂತ್ರಣದ ಕಾನೂನು ಜಾರಿಗೆ ಬರುವವರೆಗು ಮಕ್ಕಳು ಮಾಡುತ್ತಲೇ ಇರಿ. ಈ ಕಾನೂನು ಜಾರಿ ಆಗುವವರೆಗೆ ನಿಮಗೆ ಆ ಸ್ವಾತಂತ್ರ್ಯ ಇದೆ ಎಂದು ಉತ್ತರ ಪ್ರದೇಶ ಬಿಜೆಪಿ ಶಾಸಕ ವಿಕ್ರಂ ಸೈನಿ ಹಿಂದೂಗಳಿಗೆ ಕರೆ ನೀಡಿದ್ದಾರೆ.‌

ನಮ್ಮಲ್ಲಿ ನಾವಿಬ್ಬರು, ನಮಗಿಬ್ಬರು ಎಂಬ ನೀತಿ ಇದೆ. ಅದನ್ನು ಹಿಂದೂಗಳು ಮಾತ್ರ ಪಾಲಿಸಿದ್ದಾರೆ. ಕೆಲವು ಹಿಂದೂಗಳಂತೂ ನಾವಿಬ್ಬರು ನಮಗೊಂದೇ ಎಂಬಲ್ಲಿಗೇ ನಿಂತುಬಿಟ್ಟಿದ್ದಾರೆ. ಆದರೆ ಬೇರೆಯವರು ನಾವಿಬ್ಬರು ನಮಗೆ ಹದಿನೆಂಟು ಎನ್ನುತ್ತಿದ್ದಾರೆ.‌

ದೇಶದ ಕಾನೂನು ಬರೀ ಒಂದು ವರ್ಗ ಜನರಿಗೆ ಮಾತ್ರ ಸೀಮಿತವಾಗಿಲ್ಲ ಅದು ಎಲ್ಲರಿಗೂ ಸಮನ್ವಯವಾಗಿರಬೇಕು. ನೀವೂ ನಾಲ್ಕರಿಂದ ಐದು ಮಕ್ಕಳಿಗೆ ಜನ್ಮ ನೀಡಿ ಎಂದು ಜನ ನಿಯಂತ್ರಣ ಕಾರ್ಯಕ್ರಮ ಸಭೆಯೊಂದರಲ್ಲಿ ವಿಕ್ರಮ್ ಸೈನಿ ಕರೆ ನೀಡಿದ್ದಾರೆ.

ಸದಾ ವಿವಾದಾತ್ಮಕ ಹೇಳಿಕೆಯಲ್ಲೇ ಕಾಲ ಕಳೆಯುತ್ತಿರುವ ವಿಕ್ರಮ್ ಸೈನಿ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.‌ ಈ ಹಿಂದೆ ಮುಸ್ಲಿಮರು ಪಾಕಿಸ್ತಾನಕ್ಕೆ ಹೋಗಿ, ಹಿಂದುಸ್ತಾನ ಹಿಂದೂಗಳಿಗೆ ಮಾತ್ರವೇ ಸೀಮಿತ ಎಂದಿದ್ದರು. ಇದೀಗ ಹೇಳಿಕೆ ಹಿಂದೂ ಸ್ತ್ರೀಯರನ್ನು ಅವಮಾನಿಸುವ ರೀತಿಯಲ್ಲಾಗಿದೆ ಎಂದು ಜನರು ವೈರಲ್ ವಿಡಿಯೋ ಕೆಳಗೆ ಕಾಮೆಂಟ್ ಮಾಡತೊಡಗಿದ್ದಾರೆ.

Leave a Reply