ಮೈಸೂರು: ಯುವತಿಯೊರ್ವಳನ್ನು ಮದುವೆಯಾಗುವುದಾಗಿ ನಂಬಿಸಿ ಹಲವು ಬಾರಿ ಅತ್ಯಾಚಾರ ಎಸಗಿದ ಆರೋಪದಡಿ ಟಿವಿ 9 ಕನ್ನಡ ವರದಿಗಾರ ರಾಮ್ ಎಂಬಾತನ ಮೇಲೆ ಉದಯಗಿರಿ ಪೋಲಿಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಅನ್ಯ ಧರ್ಮಿಯ ವಿಚ್ಛೇದಿತ ಮಹಿಳೆಯೊರ್ವಳ ಬಳಿ ತಾನು ಈಗಾಗಲೇ ಮದುವೆಯಾಗಿರುವ ವಿಷಯವನ್ನು ಮುಚ್ಚಿಟ್ಟು ಆಕೆಯನ್ನು ನಿರಂತರವಾಗಿ ತನ್ನ ಕಾಮಕ್ಕೆ ಬಳಸಿಕೊಂಡು ಇದೀಗ ಪರಾರಿಯಾಗಿದ್ದಾನೆ ಎಂದು ತಿಳಿದುಬಂದಿದೆ.
ರಾಮ್ ಎನ್ನುವಾತ ಮೈಸೂರು ಮೂಲದ ವರದಿಗಾರ ಹಾಗೂ ಓರ್ವ ನಂಬಿಕಸ್ಥ ವ್ಯಕ್ತಿ ಆಗಿದ್ದ ಎನ್ನಲಾಗಿದೆ. ಅತ್ಯಾಚಾರಿ ಸಂತ್ರಸ್ತೆಯ ದೂರಿನನ್ವಯ ಐಸಿಸಿ 374, 420, 496 ಆರೋಪದಡಿ ಎಫ್ಐಆರ್ ದಾಖಲಾಗಿದೆ. ಆರೋಪಿಗಾಗಿ ಪೋಲಿಸರು ಹುಡುಕಾಟ ನಡೆಸುತ್ತಿದ್ದಾರೆ ಎನ್ನಲಾಗಿದೆ.