ಬೆಂಗಳೂರು: ಹಾಯ್ ಬೆಂಗಳೂರು ಪತ್ರಕರ್ತ ರವಿ ಬೆಳಗೆರೆ ಅವರು ಪಬ್ಲಿಕ್ ಟಿವಿಯ ಹಿರಿಯ ಸಂಪಾದಕ ಹಾಗೂ ನಿರೂಪಕ ರಂಗನಾಥ್ ಮೇಲೆ ಫೇಸ್ಬುಕ್ ಮುಖಾಂತರ ವಿಡಿಯೋ ಹಾಕಿ ಗರಂ ಆಗಿದ್ದಾರೆ.
ಒಂದೆರಡು ದಿನ ಜೈಲಿನಲ್ಲಿದ್ದೆ. ಆಲ್ರೈಟ್ ರಂಗ ತನ್ನ ಚಾನೇಲ್ನಲ್ಲಿ ನನ್ನ ಜೈಲಿಗೆ ಹೋದ ವಿಷಯವನ್ನು ಪದೇಪದೇ ಪ್ರಸಾರ ನಡೆಸಿ, ಇಲ್ಲ ಸಲ್ಲದ ಆರೋಪವನ್ನು ತನ್ನ ಮೇಲೆ ಹಾಕುತ್ತಿದ್ದಾರೆ ಎಂದಿದ್ದಾರೆ.
ರಂಗ ಒಬ್ಬ ಕ್ರೈ ರಿಪೋರ್ಟರ್, ಯಾವನೋ ಒಬ್ಬ ರಿಪೋರ್ಟ್ ತಂದುಕೊಟ್ಟ ಅದನ್ನೆ ಓದಿಕೊಂಡು ಹೋಗಿದ್ದಾರೆ. ಆದರೆ ಈ ರಿಪೋರ್ಟ್ ಸರಿ ಇದೀಯಾ ಇಲ್ವ ನೋಡಿ ಕೊಟ್ಟವನ ಕಪಾಳಕ್ಕೆ ಎರಡು ಬಾರೀಸೋದಲ್ವ ಎಂದು ರವಿ ಬೆಳಗರೆ ಆಕ್ರೋಶಿತರಾಗಿದ್ದಾರೆ.
ರವಿ ಬೆಳಗೆರೆ ಹಾಕಿದ ವಿಡಿಯೋ ಈಗಾಗಲೇ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು ಸಾವಿರಾರು ಮಂದಿ ನೋಡಿದ್ದಾರೆ. ಇದರ ಕುರಿತಾಗಿ ಇಲ್ಲಿಯವರೆಗೆ ರಂಗನಾಥ್ ಅವರು ಯಾವುದೇ ರೀತಿಯ ಪ್ರತಿಕ್ರಿಯೆ ನೀಡಿಲ್ಲ ಎನ್ನಲಾಗಿದೆ.