ನಮಗೆ ಹೆಣ್ಣು ಮಗು ಬೇಡ ಯಾಕೆಂದರೆ ಅವರ ಮೇಲೆ ಅತ್ಯಾಚಾರ ನಡೆಯುತ್ತದೆ. ನಮ್ಮ ಕಣ್ಣಿಂದ ಇದನ್ನು ನೋಡೋಕೆ ಆಗಲ್ಲ ದಯವಿಟ್ಟು ನನ್ನ ಮಡದಿಯ ಅಬರ್ಷನ್ ನಡೆಸಿ ಕೊಡಿ ಎಂದಾಗ ಆಸ್ಪತ್ರೆ ವೈದ್ಯೆ ಸಿಟ್ಟಾಗುತ್ತಾಳೆ.

ಹೌದು ಇದು ದಿಲ್ಲಿ ಎಫ್‌ಎಮ್ ಆರ್‌ಜೆ ನವೀದ್ ಒಬ್ಬ ವೈದ್ಯೆ ಜೊತೆ ನಡೆಸಿದ ಪೋನ್ ಸಂಭಾಷಣೆ. ಅಕ್ಕ ಕಾರಣವು ಇದೆ.‌ ಇತ್ತೀಚೆಗೆ ದಿಲ್ಲಿಯಲ್ಲಿ ಎಂಟು ತಿಂಗಳ ಹಸುಳೆ ಮೇಲೆ ಸ್ವತಃ ಸಂಬಂಧಿಯೇ ಅತೀ ಕ್ರೂರವಾಗಿ ಅತ್ಯಾಚಾರ ಎಸಗಿದ ಘಟನೆ ನಡೆದಿದೆ. ಇದರಿಂದ ನೊಂದ ಆರ್‌ಜೆ ನವೀದ್ ಈ ರೀತಿಯಲ್ಲಿ ಜನರಿಗೆ ಸಂದೇಶ ನೀಡಲು ಮುಂದಾಗಿದ್ದಾರೆ.

ದೇಶದಲ್ಲಿ ಪ್ರತಿ ಹತ್ತು ನಿಮಿಷಕ್ಕೊಂದು ಅತ್ಯಾಚಾರ ನಡೆಯುತ್ತಿದೆ. ಇದರ ವಿರುದ್ಧ ಯಾರು ದನಿ ಎತ್ತುತ್ತಿಲ್ಲ. ಹಿಂದೂ-ಮುಸ್ಲಿಮರು ಅಂಥ ಗಲಭೆ ಎಬ್ಬಿಸುವವರು ಪರಸ್ಪರ ಹೊಡೆದಾಡುವ ಬದಲು ಇಂಥ ಕಾಮುಕರ ವಿರುದ್ಧ ಯಾಕೆ ಸಂಘಟಿತರಾಗುವುದಿಲ್ಲ ಎಂದು ಪ್ರಶ್ನಿಸಿದ್ದಾರೆ.

ಪ್ರಸ್ತುತ ದೇಶದ ಪರಿಸ್ಥಿತಿಯನ್ನು ನೋಡುವಾಗ ತಾಯಂದಿರು ಹೆಣ್ಣುಮಕ್ಕಳಿಗೆ ಜನ್ಮ ನೀಡಲು ಹಿಂದೇಟು ಹಾಕುವಂತಿದೆ ಎಂದರೆ ತಪ್ಪಾಗಲಾರದು. ಕಾಮುಕರ ಅಟ್ಟಹಾಸವನ್ನು ಮಟ್ಟ ಹಾಕಲು ಆರ್‌ಜೆ ನವೀದ್‌ರಂತೆ ನಾವು ಕೂಡ ದನಿ ಎತ್ತಬೇಕಾಗಿದೆ. ಇದರ ಕುರಿತು ಜಾಗೃತಿ ಮೂಡಿಸುವುದು ನಮ್ಮೆಲ್ಲರ ಮೇಲಿರುವ ಅತೀದೊಡ್ಡ ಜವಾಬ್ದಾರಿ.

Leave a Reply