ರಾಜಸ್ಥಾನದಲ್ಲಿ ಜನರು ಬಿಜೆಪಿಗೆ ತ್ರಿವಳಿ ತಲಾಕ್ ನೀಡಿದ್ದಾರೆ ಎಂದು ಬಿಜೆಪಿ ಸಂಸದ ಶತ್ರುಘ್ನ ಸಿನ್ಹ ಲೇವಡಿ ಮಾಡಿದ್ದಾರೆ

ಬ್ರೇಕಿಂಗ್ ನ್ಯೂಸ್, ರಾಜಸ್ಥಾನದಲ್ಲಿ ಆಡಳಿತ ಪಕ್ಷಕ್ಕೆ ಹಾನಿಕಾರಕ ಫಲಿತಾಂಶ. ಬಿಜೆಪಿಗೆ ಮೊದಲ ತ್ರಿವಳಿ ತಲಾಕ್. ತಲಾಕ್ ಅಜ್ಮೀರ್, ತಲಾಕ್ ಅಲ್ವಾರ್, ತಲಾಕ್ ಮಂಡಲಗಡ. ಮಾತ್ರವಲ್ಲ ನಮ್ಮ ಪ್ರತಿಸ್ಪರ್ಧಿಗಳು ದಾಖಲೆ ಮಟ್ಟದಲ್ಲಿ ಜಯಗಳಿಸುತ್ತಿದ್ದಾರೆ ಎಂದು ಟ್ವೀಟ್ ಮಾಡಿದ್ದಾರೆ.

ಶತ್ರುಘ್ನ ಸಿನ್ಹಾ ಬಿಜೆಪಿನ್ನು ಟೀಕಿಸುತ್ತಿರುವುದು ಇದೇ ಮೊದಲಲ್ಲ. ಈ ಹಿಂದೆ ಟ್ವೀಟ್ ಮಾಡಿ ಚುನಾವಣಾ ಫಲಿತಾಂಶ ಬಿಜೆಪಿಗೆ ಎಚ್ಚರಿಕೆ ಎಂದು ಹೇಳಿದ್ದರು. ಹೀಗೆ ಹಲವು ಬಾರಿ ಪಕ್ಷಕ್ಕೆ ಮುಜುಗರ ತರುವಂತಹ ಹೇಳಿಕೆಗಳನ್ನು ನೀಡುತ್ತಾ ಇದ್ದಾರೆ. ಬಿಜೆಪಿ ಹಿರಿಯ ನಾಯಕ ಯಶವಂತ್ ಸಿನ್ಹಾ ಸ್ಥಾಪಿಸಿರುವ ‘ರಾಷ್ಟ್ರೀಯ ಮಂಚ್‌’ಗೆ ಶತ್ರುಘ್ನ ಸಿನ್ಹಾ ಮೊನ್ನೆ ಸೇರಿದ್ದಾರೆ.

Leave a Reply