ಕೋಲ್ಕತ್ತ: “ನೀವು ದ್ವೇಷದ ರಾಜಕೀಯವನ್ನು ಬೆಂಬಲಿಸುತ್ತಿರುವುದು ನರೇಂದ್ರ ಮೋದಿಯವರನ್ನು ಸಂತೃಪ್ತಿ ಪಡಿಸಲಿಕ್ಕಾಗಿದೆ. ಆದರೆ ಪಶ್ಚಿಮ ಬಂಗಾಳದ ಜನರು ಅದನ್ನು ಅಂಗೀಕರಿಸಲಾರರು ಎಂದು ಬಿಜೆಪಿ ನಾಯಕ ಮುಕುಲ್ ರಾಯ್ ಜೊತೆ ಅವರ ಪುತ್ರ ಸುಬ್ರಾಂಶು ರಾಯ್ ಹೇಳಿದ್ದಾರೆ. ಸುಭ್ರಾಂಶು ರಾಯ್ ಎರಡು ಬಾರಿ ತೃಣಮೂಲ ಕಾಂಗ್ರೆಸ್ ನಿಂದ ಶಾಸಕರಾಗಿ ಆಯ್ಕೆಯಾಗಿದ್ದಾರೆ.

ಮಮತಾ ಬ್ಯಾನರ್ಜಿಯ ನೇತೃತ್ವದಲ್ಲಿ ಬಂಗಾಳವು ಅಭಿವೃದ್ಧಿಯ ಪಥದಲ್ಲಿದೆ. ಬಂಗಾಳದ ಜನರು ನಿಮ್ಮ ಈ ರಾಜಕೀಯವನ್ನು ಸ್ವೀಕರಿಸಲಾರರು. ಆಸನ್ನವಾಗಿರುವ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಜನರು ಬಾರೀ ಸಂಖ್ಯೆಯಲ್ಲಿ ತೃಣಮೂಲ ಕಾಂಗ್ರೆಸ್ ಬೆಂಬಲಿಸಲಿದ್ದಾರೆ.

ಬಿಜೆಪಿಗೆ ಎರಡು ಮುಖಗಳಿವೆ. ಮುಕುಲ್ ‌‌ ಯುವಕರಿಗೆ ಸ್ಮಾರ್ಟ್ ಫೋನ್ ವಾಗ್ದಾನ ನೀಡುತ್ತಿರುವಾಗ ಬಿಜೆಪಿಯ ರಾಜ್ಯಾದ್ಯಕ್ಷ ಸ್ಮಶಾನ ಹೆಸರಲ್ಲಿ ಯುವಕರನ್ನು ಬೆದರಿಸುತ್ತಿದ್ದಾರೆ. ಇಂತಹ ರಾಜಕೀಯವನ್ನು ಜನರು ತಿರಸ್ಕರಿಸುತ್ತಾರೆ  ಎಂದೂ ಹೇಳಿದರು.

Leave a Reply