ಮುಂಬಯಿ: ಒಂದು ಕಾಲದಲ್ಲಿ ಇಡೀ ಬಾಲಿವುಡ್​ನಲ್ಲಿ ಸದ್ದು ಮಾಡಿದ್ದ ಖ್ಯಾತ ಹಿರಿಯ ನಟಿ ಶ್ರೀದೇವಿ 54 ಅವರು ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಬಹುಭಾಷಾ ನಟಿ ಶ್ರೀದೇವಿ ದುಬೈನಲ್ಲಿ ಕೊನೆಯುಸಿರೆಳೆದಿದ್ದಾರೆ.

ಶ್ರೀದೇವಿ ಅವರು ತಮ್ಮ ಸಂಬಂಧಿಕರ ವಿವಾಹ ಸಮಾರಂಭದಲ್ಲಿ ಪಾಲ್ಗೋಳ್ಳಲೆಂದು ತಮ್ಮ ಪತಿ ಬೋನಿ ಕಪೂರ್ ಮತ್ತು ಕಿರಿಯ ಮಗಳು ಖುಷಿ ಜೊತೆ ದುಬೈಗೆ ತೆರಳಿದ್ದರು ಈ ವೇಳೆ ಅವರು ಹೃದಯಾಘಾತದಿಂದ ಮೃತಪಟ್ಟಿದ್ದಾರೆ.

ಶ್ರೀದೇವಿ ಅವರ ಬಾವ ಸಂಜಯ್ ಕಪೂರ್ ನಟಿ ನಿಧನದ ಸುದ್ದಿಯನ್ನು ಖಚಿತ ಪಡಿಸಿದ್ದಾರೆ. ಶ್ರೀದೇವಿ ಹೃದಯಾಘಾತದಿಂದ ಸಾವನ್ನಪ್ಪಿದ್ದು, ತಾವೂ ಕೂಡ ದುಬೈಗೆ ತೆರಳುತ್ತಿರುವುದಾಗಿ ತಿಳಿಸಿದ್ದಾರೆ.

ಸುದ್ದಿ ತಿಳಿಯುತ್ತಿದ್ದಂತೆ ಬಾಲಿವುಡ್​ನ ಖ್ಯಾತ ನಟ-ನಟಿಯರು ಸಂತಾಪ ಸೂಚಿಸಿದ್ದಾರೆ.
ವಿಷಯ ತಿಳಿಯುತ್ತಿದ್ದಂತೆ ನೂರಾರು ಅಭಿಮಾನಿಗಳು ಮುಂಬೈನ ಅಂಧೇರಿಯಲ್ಲಿರುವ ಶ್ರೀದೇವಿ ಅವರ ನಿವಾಸದೆದರು ನೆರೆಯುತ್ತಿದ್ದಾರೆ.

ಇನ್ನೂ ಶ್ರೀದೇವಿ ಅವರ ಅಕಾಲಿಕ ಸಾವಿನ ಬಗ್ಗೆ ಹಲವಾರು ಕ್ರೀಡಾಪಟುಗಳು, ಸಿನಿ ತಾರೆಯರು ಕಣ್ಣೀರಿಟ್ಟಿದ್ದಾರೆ, ಮಾಜಿ ಕ್ರಿಕೆಟ್ ಪಟು ಸಚಿನ್ ತೆಂಡೂಲ್ಕರ್ ಅವರು ಶ್ರೀದೇವಿ ವಿಚಾರದಲ್ಲಿ ನೋವನ್ನು ವ್ಯಕತಪಡಿಸಿದ್ದು ‘ನಾನು ಶ್ರೀದೇವಿ ಅವರ ಸಿನಿಮಾವನ್ನು ನೋಡಿ ಬೆಳೆದವನು’ ಎಂದು ಟ್ವಿಟ್ ಮಾಡಿದ್ದಾರೆ.

Leave a Reply