ನವದೆಹಲಿ: ಒಂದೇ ಕುಟುಂಬದ ಮೂವರು ತೆರೆದ ಅಂಗಳದಲ್ಲಿ ಮೂತ್ರ ಮಾಡುತ್ತಿದ್ದನ್ನು ಗಮನಿಸಿದ ಮೂವರು ದುಷ್ಕರ್ಮಿಗಳು ಏಕಾಏಕಿ ದಾಳಿ ಮಾಡಿ ಅವಾಚ್ಯವಾಗಿ ಬೈದು, ನಂತರ ಕಬ್ಬಿಣದ ಸರಳು ಮತ್ತು ಇಟ್ಟಿಗೆಯಿಂದ ಹೊಡೆದು ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾರೆ.

ಮೂವರು ರಕ್ತದ ಮಡುವಿನಲ್ಲಿ ಬಿದ್ದದನ್ನು ದಾರಿಹೋಕರೊಬ್ಬರು ಕಂಡು ಪೊಲೀಸರಿಗೆ ಮಾಹಿತಿ ನೀಡಿದ್ದರು.

ನಂತರ ಮೂವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಇಬ್ಬರ ಸ್ಥಿತಿ ಗಂಭೀರವಾಗಿದೆ. ಹಲ್ಲೆಗೊಳಗಾದವರನ್ನು ಅನಿಲ್,ಅಜಯ್ ಮತ್ತು ರಿಶಿಯೆಂದು ಗುರುತಿಸಲಾಗಿದೆ.

ಐಪಿಸಿ 307 ನ ಪ್ರಕಾರ ಪ್ರಕರಣ ದಾಖಲಿಸಲಾಗಿದ್ದು ಆರೋಪಿಗಳನ್ನು ಬಂಧಿಸಲಾಗಿದೆ. ಆರೋಪಿಗಳು ಕುಡಿದು ಈ ಕೃತ್ಯವನ್ನು ಎಸಗಿರುವ ಬಗ್ಗೆ ತಿಳಿಸಿದ್ದಾರೆ.

ಸಾರ್ವಜನಿಕವಾಗಿ ಮೂತ್ರ ಮಾಡಿದನೆಂದು ಓರ್ವ ವ್ಯಕ್ತಿಯನ್ನು
ಕಳೆದ ವರ್ಷ ದೆಹಲಿಯಲ್ಲಿ ಕೊಲೆ ಮಾಡಲಾಗಿತ್ತು.

ಸಾಂದರ್ಭಿಕ ಚಿತ್ರ

Leave a Reply