ನಾವು ಮಾಡುವ ಕೆಲಸವನ್ನು ಶ್ರದ್ಧೆಯಿಂದ ನಿಷ್ಠೆಯಿಂದ ಮಾಡಿದರೆ ಅದು ಫಲ ಕೊಡದೇ ಇರುವುದಿಲ್ಲ ಎಂಬುದಕ್ಕೆ 23 ವರ್ಷದ ಸಾಮಾನ್ಯ ಫೋಟೋಗ್ರಾಫರ್ ಸಾಕ್ಷಿ.

ಇತ್ತೀಚೆಗೆ ಸೋಶಿಯಲ್ ಮೀಡಿಯಾದಲ್ಲಿ ಮರದ ಮೇಲೆ ಬಾವಲಿಯಂತೆ ನೇತಾಡಿ ನವ ದಂಪತಿಗಳ ಫೋಟೋ ತೆಗೆಯುವ ವಿಡಿಯೋ ಭಾರೀ ವೈರಲ್ ಆಗಿತ್ತು.

ಮದುವೆಯ ಛಾಯಾಚಿತ್ರಗ್ರಾಹಕರ ತಂಡದೊಂದಿಗೆ ಕಾರ್ಯನಿರ್ವಹಿಸುತ್ತಿರುವ ವಿಷ್ಣು
ಏಪ್ರಿಲ್ 15 ರಂದು ಶಿಯಾಜ್ ಮತ್ತು ನವ್ಯ ದಂಪತಿಗಳ ವಿವಾಹವನ್ನು ಶೂಟ್ ಮಾಡುತ್ತಿದ್ದರು.

ಮದುವೆ ಕಾರ್ಯಕ್ರಮ ಬಳಿಕ, ನಾವು ವರನ ಮನೆಯ ಹೊರಗೆ ಚಿತ್ರೀಕರಣ ಮಾಡುತ್ತಿದ್ದೆವು. ಮನೆಯ ಮುಂದೆ ಒಂದು ಮರವನ್ನು ನೋಡಿದಾಗ ಅದರ ಉನ್ನತ ಕೋನದಿಂದ ಛಾಯಾಚಿತ್ರವನ್ನು ತೆಗೆದುಕೊಳ್ಳ ಬಹುದು ಎಂದು ಮನಗಂಡೆ. ಸರಿಯಾದ ಫ್ರೇಮ್ ಸಿಗಲಿಕ್ಕಾಗಿ ನಾನು ಹಾಗೆ ಮಾಡಬೇಕಾಯಿತು” ಎಂದು ವಿಷ್ಣು ದಿ ನ್ಯೂಸ್ ಮಿನಟ್ ನೊಂದಿಗೆ ಮಾತನಾಡುತ್ತಾ ಹೇಳಿದ್ದಾರೆ.

ತನ್ನ ಅನನ್ಯ ಛಾಯಾಗ್ರಹಣದ ಕಿರು ವೀಡಿಯೊ ಮಾಡಿದವರಿಗೆ ಧನ್ಯವಾದಗಳು. ಈಗ ವಿಷ್ಣು ಸಾಮಾಜಿಕ ಮಾಧ್ಯಮದಲ್ಲಿ ಸಂಚಲನ ಮೂಡಿಸಿದ್ದಾರೆ! ಅವರ ಬದ್ಧತೆ, ಸಮರ್ಪಣೆಗಾಗಿ ಅವರನ್ನು ಜನ ಶ್ಲಾಘಿಸಿದ್ದಾರೆ. ಮಾತ್ರವಲ್ಲ ವಿಷ್ಣು ಅವರಿಗೆ ಬಾವಲಿ ಫೋಟೋಗ್ರಾಫರ್ ಎಂಬ ಹೆಸರೂ ಸಿಕ್ಕಿದೆ.

Leave a Reply