ಚೆನ್ನೈ: ಚಿತ್ರನಟ ರಜನೀಕಾಂತ್ ತೂತುಕುಡಿಗೆ ಬೇಟಿ ನೀಡಿದ ಕುರಿತ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಬುಧವಾರ ಬೆಳಿಗ್ಗೆ ತೂತುಕುಡಿಯಲ್ಲಿ ಪೋಲೀಸರ ಗುಂಡಿಗೆ ಬಲಿಯಾದ ಕುಟುಂಬದವರನ್ನು ಗಾಯಗೊಂಡವರನ್ನೂ ಬೇಟಿ ಮಾಡಲು ರಜನೀ ಕಾಂತ್ ಹೊರಟಿದ್ದರು. ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದ ಯುವಕನ ಬಳಿ ತೆರಳಿದ ರಜನೀ ಕಾಂತ್ ಕುಶಲಾನ್ವೇಶಣೆ ಮಾಡಿದಾಗ ” ಆಮಾ ನೀಂಗ ಯಾರ್?” ಎಂದು ಆತ ಕೇಳಿದ.

ಇದನ್ನು ಕೇಳಿದ ರಜನಿ ಆ ಬಗ್ಗೆ ತಲೆಕೆಡಿಸಿಕೊಳ್ಳದೆ ನಗುತ್ತಾ ನಿಂತಿದ್ದಾಗ ” ನೂರು ನಾಳ್ ಪೋರಾಡಿಯಪೋದ್ ವರಾದ ನೀಂಗ ಇಪ್ಪೋ ಏನ್ ವಂದೇಂಗ?(ನೂರು ದಿನಗಳ ಕಾಲ ಪ್ರತಿಭಟನೆ ನಡೆಯುತ್ತಿರುವಾಗ ಬರದೇ ಇದ್ದ ನೀವು ಈಗೇಕೆ ಬಂದಿದ್ದೀರಿ.) ಎಂಬ ಪ್ರಶ್ನೆ ಕೇಳಿದಾಗ ರಜನೀಕಾಂತ್ ಮತ್ತು ತಂಡ ಉತ್ತರಿಸಲಾಗದೆ ನಗುತ್ತಾ ಮುಂದೆ ಸಾಗಿದರು. ಈ ಆಸ್ಪತ್ರೆಯಲ್ಲಿ ಗಾಯಗೊಂಡ 48 ಜನರು ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ರಜನೀಕಾಂತ್ ಕೇವಲ ಏಳು ಮಂದಿಯನ್ನು ಬೇಟಿಯಾಗಿ ತನ್ನ ಸಂದರ್ಶನವನ್ನು ಮೊಟಕುಗೊಳಿಸಿದರು

Leave a Reply