ಮಂಡ್ಯ : ಕರಿಘಟ್ಟ ದೇವಾಸ್ಥಾನಕ್ಕೆ ತೆರಳುತ್ತಿದ್ದ ಮಹಿಳೆಯನ್ನು ಅಪಹರಿಸಿ ನಿರ್ಜನ ಪ್ರದೇಶದಲ್ಲಿ ಅತ್ಯಾಚಾರ ನಡೆಸಿದ ಹೇಯ ಕೃತ್ಯ ಮಂಡ್ಯದಲ್ಲಿ ವರದಿಯಾಗಿದೆ.

ಸಂಜಯ್, ಬಿಡ್ಡಾ ಮತ್ತು ರಮೇಶ್ ಎಂಬ ಮೂವರು ಹಳೆ ದ್ವೇಷದ ಕಾರಣದಿಂದ ಅತ್ಯಾಚಾರ ಎಸಗಿದ್ದಾರೆ ಎಂದು ಆರೋಪಿಸಲಾಗಿದೆ. ಮಾತ್ರವಲ್ಲ, ಆಕೆಯ ಅತ್ಯಾಚಾರದ ಮೊಬೈಲ್ ವಿಡಿಯೋ ಮಾಡಿದ್ದು , ನಾವು ಕರೆದಲ್ಲಿಗೆ ನೀನಾಗಿಯೇ ಬರಬೇಕು ಇಲ್ಲದಿದ್ದರೆ ಮಾನ ಹರಾಜು ಮಾಡುವುದಾಗಿ, ಯಾರಿಗಾದರೂ ತಿಳಿಸಿದರೆ ಕೊಲ್ಲುವುದಾಗಿ ಬೆದರಿಕೆಯೊಡ್ಡಿದ್ದಾರೆ.

ಸಂತ್ರಸ್ತೆ ಬುಧವಾರ ರಾತ್ರಿ ಶ್ರೀರಂಗಪಟ್ಟಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ ಕಾರಣದಿಂದ ಇಂತಹ ಹೇಯ ಕೃತ್ಯ ಬೆಳಕಿಗೆ ಬಂದಿದೆ. ಇದೀಗ ಆರೋಪಿಗಳು ತಲೆ ಮರೆಸಿಕೊಂಡಿದ್ದು ಪೊಲೀಸರು ಪತ್ತೆ ಹಚ್ಚಲು ಬಲೇ ಬೀಸಿದ್ದಾರೆ. .

Leave a Reply