Image: indianexpress

ಬೆಂಕಿ ಅನಾಹುತಕ್ಕೀಡಾಗುತ್ತಿದ್ದ ಕುಟುಂಬವೊಂದನ್ನು ಉತ್ತರ ಪ್ರದೇಶದ ಪೊಲೀಸರು ರಕ್ಷಿಸಿದ ಘಟನೆ ವರದಿಯಾಗಿದೆ. ಬೈಕ್ನಲ್ಲಿ ಹೋಗುತ್ತಿದ್ದ ಸಂದರ್ಭದಲ್ಲಿ ಬೈಕ್ ಗೆ ಬೆಂಕಿ ಹೊತ್ತಿದ ವಿಷಯ ಬೈಕ್ ಸವಾರನ ಗಮನಕ್ಕೆ ಬಂದಿರಲಿಲ್ಲ. ಬೈಕ್ ನಲ್ಲಿ ಮಗು ಮತ್ತು ಪತ್ನಿ ಜೊತೆಗಿದ್ದರು. ಮೊದಲಿಗೆ ಸುತ್ತ ವಾಸನೆ ಪೋಲೀಸರ ಗಮನಕ್ಕೆ ಬಂದಿದ್ದು, ಬಳಿಕ ಬೈಕ್ ಸವಾರನನ್ನು ಹಿಂಬಾಲಿಸಿ ಆತನನ್ನು ಎಚ್ಚರಿಸಿ ಕೂಡಲೇ ಬೈಕ್ ನಿಂದ ಕೆಳಗಿಳಿಯುವಂತೆ ಹೇಳಿದ್ದಾರೆ. ಇಲ್ಲದಿದ್ದರೆ ಬೆಂಕಿ ಪೆಟ್ರೋಲ್ ಟ್ಯಾಂಕ್ಗೆ ತಾಗಿ ಸ್ಫೋಟ ಗೊಳ್ಳುವ ಸಾಧ್ಯತೆ ಇತ್ತು. ಪೊಲೀಸರ ಈ ಸಮಯ ಪ್ರಜ್ಞೆಯ ವಿಡಿಯೋ ತುಂಬಾ ವೈರಲ್ ಆಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಮೆಚ್ಚುಗೆ ವ್ಯಕ್ತ ಪಡಿಸಲಾಗಿದೆ.

Leave a Reply