ಕೋವಿಡ್ ಯುಗದಲ್ಲಿ ನಾವು ಬಹಳಷ್ಟು ಹೊಸ ಹೊಸ ಘಟನೆಗಳಿಗೆ, ಜೀವನ ಶೈಲಿಗೆ ನಿರ್ಬಂಧಿತರಾಗಿದ್ದೇವೆ. ಒಂದೆಡೆ ಭಾರತದಲ್ಕಿ ಕೋವಿಡ್-೧೯ ದಿನದಿಂದ ದಿನಕ್ಕೆ ಹೆಚ್ಚಾಗುತ್ತಾ ಸಾಗುತ್ತಿದೆ. ಈ ಮಧ್ಯೆ ಮುಂಬಯಿಯ ಘಟನೆಯೊಂದು ತುಂಬಾ ಸುದ್ದಿಯಾಗಿದೆ.

ಮುಂಬೈನಲ್ಲಿ ವ್ಯಕ್ತಿಯೊಬ್ಬ ತನ್ನ ಹೆಂಡತಿಯೊಂದಿಗೆ ತನಗೆ ಕೋವಿಡ್ ಸೋಂಕು ಇದ್ದು , ಬದುಕಿ ಉಳಿಯುವುದು ಸಾಧ್ಯವಿಲ್ಲ ಎಂದು ಹೇಳಿ, ಗೆಳತಿಯೊಂದಿಗೆ ಪರಾರಿಯಾದ ಘಟನೆ ವರದಿಯಾಗಿದೆ.

ತನ್ನ ಕೊವಿಡ್ -19 ಸೋಂಕಿನ ಬಗ್ಗೆ ಕುಟುಂಬಕ್ಕೆ ಸುಳ್ಳು ಸುದ್ದಿ ನೀಡಿದ ನಂತರ ಜೂನ್ ತಿಂಗಳಲ್ಲಿ ಗೆಳತಿಯೊಂದಿಗೆ ಇಂದೋರ್‌ನಿಂದ ಪರಾರಿಯಾಗಿದ್ದ ನವೀ ಮುಂಬಯಿಯ ವಿವಾಹಿತ ವ್ಯಕ್ತಿಯನ್ನು ಪೊಲೀಸರು ಪತ್ತೆ ಮಾಡಿದ್ದಾರೆ.

ಪೊಲೀಸರ ಪ್ರಕಾರ , ವ್ಯಕ್ತಿಯು ತಾನು ಸೋಂಕಿನಿಂದ ಬದುಕುಳಿಯುವುದಿಲ್ಲ ಎಂದು ಪತ್ನಿಗೆ ತಿಳಿಸಿದರು ಮತ್ತು ಫೋನ್ ಸ್ವಿಚ್ ಆಫ್ ಮಾಡಿದ್ದರು. ಐರೋಲಿಯಲ್ಲಿ ದೊರೆತ ಸಿಸಿಟಿವಿ ದೃಶ್ಯಾವಳಿಗಳ ಸಹಾಯದಿಂದ ಆತನನ್ನು ಇಂದೋರ್‌ ನಲ್ಲಿ ಪತ್ತೆ ಮಾಡಲಾಯಿತು.

Leave a Reply