ರಾಜಸ್ತಾನ: ಗೋಹತ್ಯೆಯು ಭಯೋತ್ಪಾದನೆಗಿಂತಲೂ ದೊಡ್ಡ ಅಪರಾಧವಾಗಿದೆ. ಇದು ತಾಯಿಯ ದೇಶ. ತಾಯಿಯ ಜೊತೆ ಯಾರಾದರೂ ಗೂಂಡಾಗಿರಿ ತೋರಿದರೆ ಅದನ್ನು ಸಹಿಸುವುದಿಲ್ಲ ಎಂದು ರಾಜಸ್ಥಾನದ ಬಿಜೆಪಿ ಶಾಸಕ ಗ್ಯಾನ್ ದೇವ್ ಅಹುಜಾ ಹೇಳಿದ್ದಾರೆ.

ಗೋರಕ್ಷಣೆಯ ಹಿನ್ನೆಲೆಯಲ್ಲಿ ವ್ಯಕ್ತಿಗಳನ್ನು ಹಿಡಿದು ಕೊಲ್ಲುವ ಪ್ರಕರಣಕ್ಕೆ ಸಂಬಂಧಿಸಿದಂತೆ ಅಭಿಪ್ರಾಯ ವ್ಯಕ್ತಪಡಿಸಿದ ಅವರು, ಭಯೋತ್ಪಾದಕರು ನಾಲ್ಕೈದು ಜನರನ್ನು ಕೊಲ್ಲುತ್ತಾರೆ. ಆದರೆ ಗೋಹತ್ಯೆ ಮಾಡುವ ಮೂಲಕ ಹಿಂದೂಗಳ ಭಾವನೆಗೆ ಧಕ್ಕೆಯಾಗುತ್ತದೆ. ಗೋವುಗಳು ಕೊಲ್ಲಲ್ಪಟ್ಟರೆ, ಜನರು ಸ್ವಾಭಾವಿಕವಾಗಿ ಕೋಪಗೊಳ್ಳುತ್ತಾರೆ ಮತ್ತು ಕಳ್ಳಸಾಗಾಣಿಕೆದಾರರು ಇದರ ಪರಿಣಾಮಗಳನ್ನು ಎದುರಿಸುತ್ತಾರೆ ಎಂದು ಅವರು ಹೇಳಿದರು.

Leave a Reply