ಸಾಂದರ್ಭಿಕ ಚಿತ್ರ

ಮಹಿಳೆಯರಲ್ಲಿ ಗರ್ಭಕೋಶದ ತೊಂದರೆ ಇಂದು ಸಾಮಾನ್ಯವಾಗಿದೆ. ಪ್ರತೀ 10 ಮಹಿಳೆಯರಲ್ಲಿ 4 ಮಹಿಳೆಯರು ಗರ್ಭಕೋಶದ ತೊಂದರೆಯಿಂದ ನರಳುತ್ತಿದ್ದಾರೆ. ಗರ್ಭಕೋಶದ ತೊಂದರೆ ವಿಕೋಪಕ್ಕೆ ತೆರಳಿದಾಗ ಅದನ್ನು ತೆಗೆಯ ಬೇಕಾಗುತ್ತದೆ. ಆದರೆ ಗರ್ಭಕೋಶ ವನ್ನು ತೆಗೆಯುವುದರಿಂದ ನಾನಾ ರೀತಿಯ ತೊಂದರೆಗಳನ್ನು ಮಹಿಳೆಯರು ಎದುರಿಸಬೇಕಾಗುತ್ತದೆ.

ಗರ್ಭಕೋಶವನ್ನು 3 ರೀತಿಯಲ್ಲಿ ತೆಗೆಯುವುದು

1. ತೆರೆದ ಉದರ ಶಸ್ತ್ರಚಿಕಿತ್ಸೆಯ ಮುಖಾಂತರ.
2. ಲ್ಯಾಪ್ರೋಸ್ಕೊಪಿಯ ಮುಖಾಂತರ
3. ಯೋನಿಯ ಮುಖಾಂತರ

ತೆಗೆದ ನಂತರ ಆಗುವ ಸಮಸ್ಯೆಗಳು

1. ಜನನೇಂದ್ರೀಯದ ಸೋಂಕು ಉಂಟಾಗಬಹುದು.
2. ಸಂಭೋಗ ಕ್ರಿಯೆ ಕಷ್ಟವಾಗುತ್ತದೆ. ಯೋನಿಯು ಸಂಕುಚಿತಗೊಂಡು ಅದರ ಆಳ ಕಡಿಮೆಯಾಗಿ ಸಂಭೋಗ ಸುಖದಲ್ಲಿ ತೃಪ್ತಿ ಸಿಗುವುದಿಲ್ಲ. ಮಹಿಳೆಗೆ ಅತೀವ ಯಾತನೆ ಉಂಟಾಗುತ್ತದೆ.
3. ಮೂತ್ರಕೋಶದ ತೊಂದರೆಗಳು: ಈ ಸಮಸ್ಯೆಯಿಂದ ಮೂತ್ರ ವಿಸರ್ಜನೆ ಕಷ್ಟವಾಗುತ್ತದೆ ಮತ್ತು ಅನಿಯಂತ್ರಿತ ಮೂತ್ರ ವಿಸರ್ಜನೆಯಾಗುತ್ತದೆ.
4. ರಕ್ತ ಹೆಪ್ಪುಗಟ್ಟುತ್ತದೆ.
5. ಶಸ್ತ್ರ ಚಿಕಿತ್ಸೆ ಸಮಯದಲ್ಲಿ ಅಕ್ಕ ಪಕ್ಕದ ಅಂಗಾಂಗಗಳಿಗೆ (ಮೂತ್ರ ಕೋಶ, ಮೂತ್ರ ನಾಳ, ಕರುಳು) ಪೆಟ್ಟು ತಗಲುವ ಸಾಧ್ಯತೆಯಿರುತ್ತದೆ.
6. ಮಾನಸಿಕ ಖಿನ್ನತೆ: ತನ್ನಲ್ಲಿ ಏನೋ ಕಳಕೊಂಡ ಅನುಭವವಾಗಿ ಅದೇ ಮನಸ್ಸಿನಲ್ಲಿ ಬೇರೂರಿಟ್ಟಿರುತ್ತದೆ. ಇದರಿಂದ ಮಾನಸಿಕ ಅಸಮತೋಲನಕ್ಕೆ ಒಳಗಾಗುವ ಸಾಧ್ಯತೆ ಇರುತ್ತದೆ.
7. ಯೋನಿ ರಸದ ಉತ್ಪಾದನೆ ಕುಗ್ಗುತ್ತದೆ.
8. ಕೆಲವು ಸಾರಿ ಗರ್ಭಕೋಶದ ಜೊತೆ ಅಂಡಾಶಯಗಳನ್ನು ತೆಗೆಯುತ್ತಾರೆ. ಆಗ ಹಾರ್ಮೋನ್‍ಗಳ ಕೊರತೆ ಉಂಟಾಗಿ ಶೀಘ್ರ ಮುಪ್ಪಾಗುತ್ತಾರೆ.

ಈ ಎಲ್ಲಾ ಸಮಸ್ಯೆಗಳನ್ನು ನೋಡಿದರೆ ಗರ್ಭಕೋಶವನ್ನು ತೆಗೆಯುವ ಬದಲು ಇತರ ಪರಿಹಾರಗಳಿವೆಯೇ ಎಂದು ತಿಳಿದುಕೊಂಡು ಸಮಸ್ಯೆ ಬಗೆಹರಿಸಿಕೊಳ್ಳಬೇಕು. ಒಂದು ವೇಳೆ ಬೇರೆ ಯಾವುದೇ ಪರಿಹಾರವೇ ಇಲ್ಲವೆಂದಾಗ ಮಾತ್ರ ಗರ್ಭಕೋಶವನ್ನು ತೆಗೆಸಬಹುದು. ಗರ್ಭ ಕೋಶ ತೆಗೆಸುವ ಮುನ್ನ ಯೋಚಿಸಬೇಕು ಮತ್ತು ಆಪ್ತ ವೈದ್ಯರೊಡನೆ, ಕುಟುಂಬ ವೈದ್ಯರೊಡನೆ ಸಮಾಲೋಚಿಸಬೇಕು. ಕೆಲವರಲ್ಲಿ ಮಾಸಿಕ ಋತುಸ್ರಾವದ ತೊಂದರೆಯಿರುತ್ತದೆ. ಮಾಸಿಕ ಋತುಸ್ರಾವ ಸರಿಯಾಗಿ ಆಗುವುದಿಲ್ಲ. ಈ ತೊಂದರೆಗೂ ಗರ್ಭಕೋಶ ತೆಗೆಯುವುದಕ್ಕೂ ಯಾವುದೇ ಸಂಬಂಧವಿಲ್ಲ. ಮುಟ್ಟಿನ ತೊಂದರೆಯಾಗು ವುದು ಹಾರ್ಮೋನ್‍ಗಳ ವ್ಯತ್ಯಾಸದಿಂದ.

ಮಾಸಿಕ ಋತುಸ್ರಾವ ಸರಿಯಾಗಿ ಆಗದಿರುವುದಕ್ಕೆ Oligomenorrhea ಎಂದು ಕರೆಯುತ್ತಾರೆ. ಈ ರೀತಿಯ ಸಮಸ್ಯೆಗಳಲ್ಲಿ ಮುಟ್ಟು ತಿಂಗಳಿಗೆ ಸರಿಯಾಗಿ ಆಗದೆ 2 ಅಥವಾ 3 ತಿಂಗಳಿಗೆ ಒಂದು ಬಾರಿ ಆಗುತ್ತಿರುತ್ತದೆ. ಇದಕ್ಕೆ ಪ್ರಮುಖ ಕಾರಣಗಳೆಂದರೆ.
1. ಅಂಡಾಶಯದ ನೀರ್ಗಂಟುಗಳು.
2. ಹಾರ್ಮೋನ್ ವ್ಯತ್ಯಾಸ. ಮುಖ್ಯ ವಾಗಿ ಈಸ್ಟ್ರೋಜನ್ ಮತ್ತು ಪೆÇ್ರಜ್ ಸ್ಟೊರಾನ್ ಹಾರ್ಮೋನ್‍ಗಳ ವ್ಯತ್ಯಾಸ.
3. ಮಾನಸಿಕ ಮತ್ತು ದೈಹಿಕ ಒತ್ತಡ, ಆಯಾಸ.
4. ಕಾಯಿಲೆಗಳಿಂದ ದೀರ್ಘಕಾಲದ ಜ್ವರ ಇತ್ಯಾದಿ.
5. ಪುರುಷ ಪ್ರಧಾನ ಹಾರ್ಮೋನಾದ ಆಂಡ್ರೋಜನ್ ಹೆಚ್ಚಾಗಿ ಉತ್ಪಾದಿಸ ಲ್ಪಟ್ಟಿರುವುದು.
6. ಅಪೌಷ್ಟಿಕತೆ.
ಒಂದು ಮುಟ್ಟಿನ ಅವಧಿಗೂ ಮತ್ತೊಂದು ಮುಟ್ಟಿನ ಅವಧಿಗೂ 35 ದಿನಗಳ ಅಂತರವಿರುತ್ತದೆ. ಕೆಲವರು ಒಂದು ವರ್ಷದಲ್ಲಿ 4 ಅಥವಾ 5 ಬಾರಿ ಮಾತ್ರ ಮುಟ್ಟಾಗುತ್ತಾರೆ. ಇದೇ ಅದರ ಚಿಹ್ನೆಗಳು.

ಇದರಿಂದಾಗಿ ಮುಂದೆ ಗರ್ಭಧರಿಸಲು ತೊಂದರೆ ಉಂಟಾಗುತ್ತದೆ ಮತ್ತು ಬಂಜೆತನದ ಸಮಸ್ಯೆ ಕಂಡುಬರಬಹುದು. ಅದಕ್ಕಾಗಿ ಕೀಳ್ಗುಲಿ ಸ್ಕ್ಯಾನಿಂಗ್  ರಕ್ತ ಮತ್ತು ಮೂತ್ರ ಪರೀಕ್ಷೆ, ಹಾರ್ಮೋನ್ ಪರೀಕ್ಷೆಗಳನ್ನು ಮಾಡುವುದರಿಂದ ನಿಧಾನ ಮುಟ್ಟಿನ ಕಾರಣ ಕಂಡು ಹಿಡಿಯಬಹುದು.

ಈ ಸಮಸ್ಯೆಗೆ ಕಾರಣಗಳನ್ನು ಅವಲಂಬಿಸಿ ಚಿಕಿತ್ಸೆಯನ್ನು ನೀಡಲಾಗುತ್ತದೆ. ಅದೆಂದರೆ
1. ಪೌಷ್ಠಿಕ ಆಹಾರ ಸೇವನೆ.
2. ಹಾರ್ಮೋನ್ ತೊಂದರೆಗೆ ಹಾರ್ಮೋನ್ ಚಿಕಿತ್ಸೆ.
3. ಮಾನಸಿಕ ಒತ್ತಡಕ್ಕೆ ಸೈಕೋಥೆರಪಿ
4. ಅಂಡಾಶಯದಲ್ಲಿ ಗಂಟುಗಳಿದ್ದರೆ, ಗಂಟು, ಗಡ್ಡೆಯನ್ನು ಶಸ್ತ್ರ ಚಿಕಿತ್ಸೆಯಿಂದ ತೆಗೆಯಲಾಗುತ್ತದೆ.
ಈ ಸಮಸ್ಯೆ ತಲೆದೋರಿದಂತೆ ಕೆಲವೊಂದು ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳುವುದರಿಂದ ಸಮಸ್ಯೆ ಬಾರದಂತೆ ನಿಯಂತ್ರಿಸಬಹುದಾಗಿದೆ.
1. ಈ ಸಮಸ್ಯೆಯು ಪ್ರಾರಂಭದಲ್ಲಿರು ವಾಗಲೇ ತಜ್ಞ ವೈದ್ಯರನ್ನು ಕಾಣಬೇಕು.
2. ದೇಹವನ್ನು ಸಮತೋಲನದಲ್ಲಿರಿಸಿ ಕೊಳ್ಳಬೇಕು.
3. ಮಾದಕ ದ್ರವ್ಯಗಳನ್ನು ಸೇವಿಸ ಬಾರದು.
4. ಮಾನಸಿಕ ಸ್ಥಿತಿಯನ್ನು ಉತ್ತಮ ಪಡಿಸಿಕೊಳ್ಳಬೇಕು.

ಕೆಲವರಿಗೆ ಮಾಸಿಕ ಋತುಸ್ರಾವದ ಸಮಯ ಹೊಟ್ಟೆನೋವು ಬರುತ್ತದೆ. ಇದಕ್ಕೆ ಕಾರಣಗಳೇನೆಂದರೆ:

1. ಒಳ ಜನನೇಂದ್ರಿಯಗಳಲ್ಲಿ ಸೋಂಕು ತಗುಲಿದಾಗ ಅವುಗಳಲ್ಲಿ ರಕ್ತ ಚಲನೆಯಾಗುವುದು ಹೆಚ್ಚಾಗುತ್ತದೆ. ರಕ್ತದ ಪೂರೈಕೆ ಹೆಚ್ಚಾಗುವುದರಿಂದ ನೋವು ಉಂಟಾಗುತ್ತದೆ.
2. ಗರ್ಭಕೋಶವು ಸಂಕುಚಿತ ಗೊಂಡಾಗ ತನ್ನ ಒಳವರಿಯನ್ನು ಕಳಚಿ ಹಾಕುತ್ತದೆ. ಇಂತಹ ಸಂದರ್ಭದಲ್ಲಿ ರಕ್ತದ ಕಡಿಮೆ ಪೂರೈಕೆ ಯಿಂದಾಗಿ ಗರ್ಭಾಶಯದಲ್ಲಿ ಸೆಳೆತ ವುಂಟಾಗಿ ನೋವು ಬರುತ್ತದೆ.
3. ಗರ್ಭಕಂಟವು ಕಿರಿದಾದಾಗ ಸ್ರಾವವು ಸರಾಗವಾಗಿ ಆಗದೇ ಗರ್ಭ ಕೋಶದ ಒಳಗೆ ಮುಟ್ಟಿನ ರಕ್ತ ಶೇಖರಣೆ ಯಾಗಿ ಹೆಪ್ಪುಗಟ್ಟಿ ಹೊರಗೆ ಬರುವುದಕ್ಕೆ ಆಗದೇ ಇರುವ ಸಂದರ್ಭದಲ್ಲಿ ನೋವು ಬರುತ್ತದೆ. ಹೀಗೆ ಶೇಖರಣೆಯಾದ ರಕ್ತ ವನ್ನು ಹೊರ ಹಾಕಲು ಗರ್ಭಕೋಶವು ತೀವ್ರತರವಾಗಿ ಸಂಕುಚಿತಗೊಳ್ಳಲು ಪ್ರಯತ್ನಿಸಿ ನೋವುಂಟಾಗುತ್ತದೆ.
4. ಗರ್ಭಕೋಶದಲ್ಲಿನ ನ್ಯೂನತೆ ಗಳಿಂದಲೂ ಸಹ ನೋವುಂಟಾಗುತ್ತದೆ. ಉದಾಹರಣೆಗೆ: ನಾರುಗಂಟು, ಒಳವರಿಯ ಗಂಟು, ಕಿರಿದಾದ ಗರ್ಭಕಂಠ ಮತ್ತು ಸ್ಥಾನಪಲ್ಲಟಗೊಂಡ ಗರ್ಭಕೋಶ ಇಂತಹ ಸಮಸ್ಯೆಗಳಿದ್ದಾಗ ನೋವು ಉಂಟಾಗುತ್ತದೆ ಮತ್ತು ನೋವಿನ ತೀವ್ರತೆಯು ಹೆಚ್ಚಿರುತ್ತದೆ.
5. ಅಂಡಾಶಯದಲ್ಲಿ ಕಂಡುಬರುವ ಗಡ್ಡೆ, ಗಂಟು, ದುರ್ಮಾಂಸಗಳೂ ಸಹ ಮುಟ್ಟು ನೋವಿಗೆ ಕಾರಣವಾಗುತ್ತದೆ.
6. ಕೀಳ್ಗುಳಿ ಸೋಂಕು ಕಾಯಿಲೆ ಯಿಂದ ಒಳ ಜನನೇಂದ್ರಿಯಗಳಲ್ಲಿ ಸೋಂಕು ಉಂಟಾಗಿ ಒಳ ಜನನೇಂದ್ರಿಯ ಗಳು ಒಂದಕ್ಕೊಂದು ಅಂಟಿಕೊಳ್ಳುತ್ತವೆ. ಇಂತಹ ಸಂದರ್ಭದಲ್ಲಿ ಸಾಮಾನ್ಯವಾಗಿ ಬಿಳಿಸೆರಗು ಕಾಣಿಸಿಕೊಳ್ಳುತ್ತದೆ. ಗರ್ಭ ಕೋಶದ ಒಳಗೆ ಯಾವುದಾದರೂ ಹೊರ ವಸ್ತು ಸೇರಿಸಿಕೊಂಡಾಗ ಮತ್ತು ವಂಕಿ ಅಳವಡಿಸಿದಾಗ ಕೆಲವು ಸಾರಿ ಸೋಂಕುಂಟಾಗಿ ಬಿಳಿಸೆರಗು ಕಂಡುಬರು ತ್ತದೆ ಮತ್ತು ನೋವು ಉಂಟಾಗುತ್ತದೆ.
7. ಹುಟ್ಟಿನಿಂದಲೇ ಕಂಡುಬರುವ ಅಥವಾ ಜನನದಿಂದಲೇ ಇರುವಂತಹ ಕೆಲವೊಂದು ದೈಹಿಕ ದೋಷಗಳಿಂದ ಈ ಸಮಸ್ಯೆ ಉಂಟಾಗುತ್ತದೆ.
8. ಕನ್ಯಾಪೊರೆ ಹರಿಯದೆ ಇರುವುದು ನೋವಿಗೆ ಮತ್ತೊಂದು ಕಾರಣ.
9. ಕೆಲವು ಸಾರಿ ಜನನೇಂದ್ರಿಯಗಳಲ್ಲಿ ಅಲ್ಲದೇ ಅಕ್ಕ-ಪಕ್ಕದ ಅಂಗಾಂಗಗಳಲ್ಲಿ ತೊಂದರೆಯಿಂದಾಗಿ ಕೂಡಾ ಮುಟ್ಟಿನ ಸಂದರ್ಭದಲ್ಲಿ ನೋವುಂಟಾಗುತ್ತದೆ.
ಹೀಗೆ ಮಹಿಳೆಯರಿಗೆ ಆರೋಗ್ಯಕ್ಕೆ ಸಂಬಂಧಿಸಿದ ಹಲವಾರು ತೊಂದರೆ, ಕ್ಲೇಶಗಳು ತಪ್ಪಿದ್ದಲ್ಲ. ಇದು ಆಧುನಿಕ ಯುಗ. ಪ್ರತಿ ಮಹಿಳೆಯೂ ದಿಟ್ಟತನದಿಂದ ತನ್ನ ಮುತುವರ್ಜಿಯನ್ನು ತಾನೇ ವಹಿಸಬೇಕಾಗಿದೆ. ಸಮಸ್ಯೆಗಳು ಸಣ್ಣ ದಿರುವಾಗಲೇ ನಿರ್ಲಕ್ಷ್ಯ ಮಾಡದೆ ತಜ್ಞ ವೈದ್ಯರ ಸಲಹೆ ಪಡೆದು ಸಮಸ್ಯೆಗಳನ್ನು ಆದಷ್ಟು ಮಟ್ಟಿಗೆ ಕೂಡಲೇ ನಿವಾರಿಸಿ ನೆಮ್ಮದಿಯ ಜೀವನ ನಡೆಸಲು ಪ್ರಯತ್ನ ಮಾಡಬೇಕಾಗಿದೆ.

ಟಿ ಶಾರದಾ ಎ. ಅಂಚನ್, ನವಿಮುಂಬಯಿ

Leave a Reply