ಇಂದೋರ್: ಮಂದಸೌರ್ ದಲ್ಲಿ ಏಳು ವರ್ಷದ ಹಿಂದೂ ಹುಡುಗಿಯ ಮೇಲೆ ಅತ್ಯಾಚಾರ ನಡೆಸಿ ಕೊಲೆ ಮಾಡಿದ ಮುಸ್ಲಿಂ ಯುವಕನಿಗೆ ಉಗ್ರ ಶಿಕ್ಷೆ ನೀಡಬೇಕೆಂದು ಮುಸ್ಲಿಂ ಮುಖಂಡರು ಹೇಳಿದ್ದಾರೆ.

ಈ ಘಟನೆ ನಡೆದ ಒಂದು ದಿನದ ಬಳಿಕ ಪ್ರತಿಭಟನೆ ನಡೆಸಿದ ಮುಸ್ಲಿಂ ಸಮುದಾಯದ ನಾಯಕರು, ಇಂತಹ ಕೃತ್ಯವೆಸಗಿದ ಆರೋಪಿಯನ್ನು ಸಮಾಧಿ ಮಾಡಲು ಜಿಲ್ಲೆಯಲ್ಲಿ ಯಾವುದೇ ಸಮಾಧಿ ಸ್ಥಳ ನೀಡಬಾರದು ಮತ್ತು ಯಾರೂ ಆತನ ಜನಾಝಾ ನಮಾಝ್ ಕೂಡ ನಿರ್ವಹಿಸಬಾರದು ಎಂದು ಆಗ್ರಹಿಸಿದ್ದಾರೆ.

“ಇಂತಹ ರಾಕ್ಷಸರಿಗೆ ಸಮುದಾಯದಲ್ಲಿ ಯಾವುದೇ ಸ್ಥಾನವಿಲ್ಲ, ಮಾತ್ರವಲ್ಲ ಅಂಥವರನ್ನು ಗಲ್ಲಿಗೇರಿಸಬೇಕು” ಎಸ್ಪಿಗೆ ಮನವಿ ಸಲ್ಲಿಸಿದ ಬಳಿಕ ವರದಿಗಾರರೊಂದಿಗೆ ಮಾತನಾಡುತ್ತಾ
ವಕ್ಫ್ ಅಂಜುಮಾನ್ ಇಸ್ಲಾಂ ಸಮಿತಿಯ ಅಧ್ಯಕ್ಷ ಮುಹಮ್ಮದ್ ಯುನುಸ್ ಶೇಖ್ ಹೇಳಿದರು.

ಕಳೆದ ಮಂಗಳವಾರ ಮಂದಸೌರ್ ಹಾಫಿಝ್ ಕಾಲನಿಯಲ್ಲಿ ಶಿಕ್ಷಣ ಕೇಂದ್ರದಿಂದ ಎರಡನೇಯ ತರಗತಿ ವಿದ್ಯಾರ್ಥಿನಿ ನಾಪತ್ತೆಯಾಗಿದ್ದಳು. ಅತ್ಯಾಚಾರಕ್ಕೊಳಗಾಗಿ ಕೊಲ್ಲಲ್ಪಟ್ಟ ಹುಡುಗಿಯನ್ನು  ಸಿಸಿ ಟಿವಿ ಸಹಾಯದಿಂದ ಪೊಲೀಸರು ಪತ್ತೆ ಹಚ್ಚಿದ್ದು, ಸಿಸಿ ಟಿವಿ ಆಧಾರದ ಮೇಲೆ ಇರ್ಫಾನ್ ಎಂಬ ಆರೋಪಿಯನ್ನು ಬಂಧಿಸಲಾಗಿದೆ.

 

 

Leave a Reply