ಇಡುಕ್ಕಿ: ಬಸ್ ಚಾಲನೆ ನಡೆಡಸುತ್ತಿರುವಂತೆ ಮೊಬೈಲ್ ರಿಪೇರಿ ಮಾಡುತ್ತಿದ್ದ ಕೆಎಸ್ಆರ್ಟಿಸಿ ಬಸ್ ಚಾಲಕನನ್ನು ಸಸ್ಪೆಂಡ್ ಮಾಡಲಾಗಿದೆ.
ಕೇರಳದ ಇಡುಕ್ಕಿ ಜೆಲ್ಲೆಯ ಕುಮಾಲ ಎಂಬಲ್ಲಿ ಚಾಲಕ ಜಯಚಂದ್ರನ್ ಎಂಬವರು ಹೈವೇಯಲ್ಲಿ ವೇಗವಾಗಿ ಬಸ್ ಚಾಲನೆ ನಡೆಸುತ್ತಿರುವಂತೆ ಮೊಬೈಲ್ ದುರಸ್ತಿ ಮಾಡಿದ್ದ ಚಿತ್ರ ವೈರಲ್ ಆಗಿತ್ತು.
ಈ ಚಾಲಕ ತನ್ನ ಮೊಬೈಲಿನ ಬ್ಯಾಟರಿಯನ್ನು ಕಳಚಿ ಬಟ್ಟೆಯ ಮೂಲಕ ಒರೆಸಿ ಸ್ವಚ್ಚಗೊಳಿಸುತ್ತಾ ಮೊಬೈಲ್ ಸರಿಪಡಿಸುತ್ತಿರುವುದು ದೃಶ್ಯದಲ್ಲಿ ಸೆರೆಹಿಡಿಯಲಾಗಿತ್ತು.
ಬಲ ಬದಿಯಲ್ಲಿ ಕುಳಿತಿದ್ದ ಗಿರೀಶ್ ಎಂಬ ಪ್ರಯಾಣಿಕರು ಇದನ್ನು ಸೆರೆಹಿಡಿದಿದ್ದರು. ಮುಂದಿನಿಂದ ಹಾದು ಬರುವ ಹಲವು ವಾಹನಗಳಿರುವುದನ್ನು ಚಾಲಕ ನಿರ್ಲಕ್ಷ ಮಾಡಿದ್ದು ಕೂಡಾ ದೃಶ್ಯದಲ್ಲಿ ಕಂಡು ಬಂದಿತ್ತು.