ಅತ್ಯಾಚಾರಕ್ಕೊಳಗಾದ ಹೆಣ್ಮಗಳ ಸಂಬಂಧಿಕರುಳನ್ನು ಆಸ್ಪತ್ರೆಯಲ್ಲಿ ಭೇಟಿ ಮಾಡಿದ ಸಂಸದ ಸುಧೀರ್ ಗುಪ್ತರವರಿಗೆ ಕೃತಜ್ಞತೆ ಹೇಳಬೇಕೆಂದು ಶಾಸಕ ಸುದರ್ಶನ್ ಗುಪ್ತ ಆದೇಶಿಸಿದ್ದು ವಿವಾದವಾಗಿದೆ. ಘಟನೆಯ ವಿರುದ್ಧ ತೀವ್ರ ಪ್ರತಿಭಟನೆ ಭುಗಿಲೆದ್ದಿದೆ.

ಕಳೆದ ಮಂಗಳವಾರ ಮಂದಸೌರ್ ಹಾಫಿಝ್ ಕಾಲನಿಯಲ್ಲಿ ಶಿಕ್ಷಣ ಕೇಂದ್ರದಿಂದ ಎರಡನೇಯ ತರಗತಿ ವಿದ್ಯಾರ್ಥಿನಿ ನಾಪತ್ತೆಯಾಗಿದ್ದಳು.

ಬಳಿಕ ಹುಡುಕಾಡಿದಾಗ ಸುಮಾರು ಏಳುನೂರು ಮೀಟರ್ ದೂರದ ಕಾಡಿನ ಪ್ರದೇಶದಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆಯಾದಳು. ಸಾಮೂಹಿಕ ಅತ್ಯಾಚಾರಕ್ಕೊಳಗಾಗಿ ತೀವ್ರ ಹಿಂಸೆ ದೌರ್ಜನ್ಯಕ್ಕೊಳಗಾಗಿದ್ದಳು. ಈ ಮಧ್ಯೆ ಹುಡುಗಿ ಇಂದೋರ್ ಎಮ್.ವೈ ಆಸ್ಪತ್ರೆಯಲ್ಲಿದ್ದಾಗ ಸಂಸದ ಸುಧೀರ್ ಗುಪ್ತರವರು ಭೇಟಿಯಾಗಿದ್ದರು.

ಭೇಟಿಯಾಗಿ ಹೊರಡಲನುವಾದಾಗ ಸಂಸದರು ತುಂಬಾ ದಣಿದಿದ್ದಾರೆ ಅವರಿಗೆ ಕೃತಜ್ಞತೆ ಸಲ್ಲಿಸಲು ಸ್ಥಳೀಯ ಶಾಸಕ ಆದೇಶಿಸಿದಾಗ ಕೈಜೋಡಿಸಿ ಕೃತಜ್ಞತೆ ಸಲ್ಲಿಸಿದರು. ಈ ದೃಶ್ಯ ವೈರಲ್ ಆಗುವುದರೊಂದಿಗೆ ಶಾಸಕರ ವಿರುದ್ಧ ಪ್ರತಿಭಟನೆ ತೀವ್ರಗೊಂಡಿದೆ. ಆರೋಪಿಗಳಿಗೆ ಮರಣದಂಡನೆ ವಿಧಿಸಬೇಕೆಂಬ ಒತ್ತಾಯ ಜನರಿಂದ ಕೇಳಿ ಬಂದಿದೆ.

Leave a Reply