ನವದೆಹಲಿ: ಸೇನೆಯ ವಿರುದ್ಧ ಕಲ್ಲೆಸೆಯುವವರನ್ನು ಗುಂಡುಹಾರಿಸಿ ಕೊಲ್ಲಬೇಕೆಂದು ಬಿಜೆಪಿ ಸಂಸದ ಟಿ.ಪಿ ವತ್ಸ್ ಹೇಳಿದ್ದಾರೆ.

ಸೇನೆಯ ವಿರುದ್ಧ ಕಲ್ಲೆಸೆದವರ ವಿರುದ್ಧದ ಪ್ರಕರಣಗಳನ್ನು ಹಿಂದೆಗೆಯುವ ಸರಕಾರದ ನಿರ್ಧಾರದ ವಿರುದ್ಧ ಸಂಸದ ಈ ಹೇಳಿಕೆ ನೀಡಿದ್ದಾರೆ. ಕಳೆದ ಫೆಬ್ರವರಿಯಲ್ಲಿ ಸೇನೆಯ ವಿರುದ್ದ ಕಲ್ಲೆಸೆದ ಸಾವಿರಾರು ಜನರ ವಿರುದ್ದ ದಾಖಲಿಸಿದ ಎಫ್.ಐ.ಆರ್ ರದ್ದು ಪಡಿಸುವ ನಿರ್ಧಾರವನ್ನು ಕಾಶ್ಮೀರದ ಬಿಜೆಪಿ ಪಿ.ಡಿ.ಪಿ. ಮೈತ್ರಿಕೂಟ ಸರಕಾರ ಕೈಗೊಂಡಿತ್ತು.

ಈ ಸಣ್ಣ ಅಪರಾಧಗಳು ಮಾಡಿದ ಮಕ್ಕಳ ವಿರುದ್ಧದ ಕೇಸುಗಳನ್ನು ಸರಕಾರ ರದ್ದು ಮಾಡಲಾಗುತ್ತದೆ ಎಂದು ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಹೇಳಿದ ಎರಡು ದಿನಗಳಲ್ಲಿ ಈ ಪ್ರತಿಕ್ರಿಯೆ ವ್ಯಕ್ತವಾಗಿದೆ.

Leave a Reply