ಹೊಸದಿಲ್ಲಿ: ಕಾಶ್ಮೀರ ಸಂಪಾದಕ ಶುಜಾತ್ ಬುಖರಿಯವರ ಕೊಲೆ ಪ್ರಕರಣದಲ್ಲಿ ಮೂವರು ಶಂಕಿತರ ಫೋಟೋಗಳನ್ನು ಶ್ರೀನಗರ ಪೊಲೀಸರು ಬಿಡುಗಡೆ ಮಾಡಿದ್ದಾರೆ. ಕಾಶ್ಮೀರ ಹಿರಿಯ ಪತ್ರಕರ್ತ ಜೊತೆಗೆ ಅವರ ಇಬ್ಬರು ವೈಯಕ್ತಿಕ ಭದ್ರತಾ ಅಧಿಕಾರಿಗಳೂ ಗುಂಡೇಟಿಗೆ ಬಲಿಯಾಗಿದ್ದಾರೆ.

ಪ್ರೆಸ್ ಕಾಲೋನಿಯಲ್ಲಿ ಪತ್ರಕರ್ತರ ಮೇಲೆ ನಡೆದ ದಾಳಿಯಲ್ಲಿ ಭಾಗಿಯಾದವರ ಫೋಟೋಗಳನ್ನು ಸಿ.ಸಿ.ಟಿ.ವಿ ಸಹಾಯದಿಂದ ಪೊಲೀಸರು ಪಡೆದಿದ್ದಾರೆ ಎಂದು ನಗರದ ಪೊಲೀಸರು ತಿಳಿಸಿದ್ದಾರೆ.

ಫೋಟೋಗಳಲ್ಲಿ ಕಾಣುವಂತೆ ಮೂವರು ಮೋಟರ್ ಬೈಕ್ ನಲ್ಲಿ ಬಂದಿದ್ದು, ಹೆಲ್ಮೆಟ್ನಿಂದ ಮುಚ್ಚಿದ್ದರಿಂದ ಮುಖವು ಅಸ್ಪಷ್ಟವಾಗಿದೆ. ಶುಜಾತ್ ಬುಖಾರಿ ಅವರ ಸಾವಿನಿಂದ ಬಾರಾಮುಲ್ಲಾದಲ್ಲಿನ ಅವರ ಕುಟುಂಬಸ್ಥರು ಮತ್ತು ಸ್ನೇಹಿತರು ದುಃಖಿತರಾಗಿದ್ದಾರೆ.

Photo courtesy : ANI

Leave a Reply