ನವದೆಹಲಿ: ಉತ್ತರಪ್ರದೇಶದ ಸಕ್ಕರೆ ಕಾರ್ಖಾನೆ ಝಿಂಭೊಹಲಿಶುಗನ್ ಎಂಬ ಸಂಸ್ಥೆಯು ಓರಿಯೆಂಟಲ್ ಬ್ಯಾಂಕ್ನಿಂದ 109 ಕೋಟಿ ರೂಪಾಯಿ ವಂಚನೆ ನಡೆಸಿದೆಯೆಂಬ ಆರೋಪ ವ್ಯಕ್ತವಾಗಿದೆ.
ನೀರವ್ ಮೋದಿ ಪಂಜಾಬ್ ನಾಷನಲ್ ಬ್ಯಾಂಕ್ ವಂಚನೆಯು ಬಹಿರಂಗಗೊಂಡ ಬಳಿಕ ಈ ವಂಚನೆ ಪ್ರಕರಣ ಬೆಳಕಿಗೆ ಬಂದಿದೆ.
ಸಂಸ್ಥೆಯು ಕಬ್ಬು ಬೆಳೆಗಾರರಿಗೆ ನೀಡಿದ 149 ಕೋಟಿ ವೈಯಕ್ತಿಕ ಸಾಲವನ್ನು ಸಂಸ್ಥೆಯು ದುರುಪಯೋಗ ಪಡಿಸಿದೆ ಎಂದು ಬ್ಯಾಂಕ್ ಆರೋಪಿಸಿದೆ.
2011 ರಲ್ಲಿ ಈ ಪ್ರಕರಣದ ಘಟನೆ ನಡೆದಿದ್ದು ಈ ಕುರಿತು ಬ್ಯಾಂಕ್ ಸಿ.ಬಿ.ಐ ಗೆ ದೂರು ನೀಡಿದೆ.